Crime

ಅಳಿಯನಿಂದಲೇ ಅತ್ತೆಯ ಹತ್ಯೆ: ಚಾಕುವಿನಿಂದ ಇರಿದು ಕೊಲೆ

ಅಳಿಯನಿಂದಲೇ ಅತ್ತೆಯ ಹತ್ಯೆ: ಚಾಕುವಿನಿಂದ ಇರಿದು ಕೊಲೆ

 

ಶಿರಸಿ: ತಾಲೂಕಿನ ಒಕ್ಕಲಕೊಪ್ಪ ದೊಳ್ಳಿಯಲ್ಲಿ ಕ್ಷುಲ್ಲಕ ಕಾರಣಕ್ಕೆ ಅಳಿಯನಿಂದ ಅತ್ತೆಯ ಕೊಲೆ ನಡೆದಿದೆ. ಕೊಲೆ ಆರೋಪಿ ಬಸವರಾಜ್ ಪುಟ್ಟಪ್ಪ ನಾಯ್ಕ ತನ್ನ 70 ವರ್ಷದ ಅತ್ತೆ ಕಮಲಾ ನಾರಾಯಣ ನಾಯ್ಕರನ್ನು ಚಾಕುವಿನಿಂದ ಇರಿದು ಕೊಂದಿದ್ದಾನೆ.

ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಯ ಪತ್ನಿ ಗೀತಾ ಬಸವರಾಜ್ ನಾಯ್ಕ ಶಿರಸಿ ಗ್ರಾಮೀಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪತಿ ಬಸವರಾಜ್ ವಿರುದ್ಧ ದೂರು ದಾಖಲಿಸಿದ ಗೀತಾ, ತನ್ನ ತಾಯಿಯ ಕೊಲೆಗೆ ಪತಿಯೇ ಕಾರಣ ಎಂದು ತಿಳಿಸಿದ್ದಾರೆ.

ಪೊಲೀಸರು ಪ್ರಕರಣವನ್ನು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. ಕೊಲೆಗೆ ಹಿಂದಿರುವ ಕಾರಣಗಳು ಮತ್ತು ಘಟನೆಯ ವಿವರಗಳನ್ನು ಗುರುತಿಸಲು ಪೊಲೀಸರು ಮುಂದಾದರೂ, ಪ್ರಾಥಮಿಕವಾಗಿ ಕುಟುಂಬ ವಿವಾದವೇ ಈ ಹತ್ಯೆಗೆ ಕಾರಣ ಎಂದು ಅಂದಾಜಿಸಲಾಗಿದೆ.

ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!