Crime

ಭಟ್ಕಳ ನಗರ ಸ್ಪೋಟಿಸೋದಾಗಿ ಪೊಲೀಸ್ ಠಾಣೆಗೆ ಇ-ಮೇಲ್!

ಭಟ್ಕಳ ನಗರ ಸ್ಪೋಟಿಸೋದಾಗಿ ಪೊಲೀಸ್ ಠಾಣೆಗೆ ಇ-ಮೇಲ್!

 

ಕಾರವಾರ: ಭಟ್ಕಳ ನಗರವನ್ನು 24 ಗಂಟೆಗಳೊಳಗೆ ಸ್ಫೋಟಿಸುವ ಬೆದರಿಕೆಯನ್ನು ಹೊಂದಿರುವ ಇ-ಮೇಲ್ ಸಂದೇಶವನ್ನು ಪೊಲೀಸ್ ಠಾಣೆಗೆ ಕಳುಹಿಸಲಾಗಿದೆ. ಈ ಬೆದರಿಕೆಯ ಸಂದೇಶವನ್ನು ಇ-ಮೇಲ್ಗಳ ಮೂಲಕ ಭಟ್ಕಳ ಶಹರ ಠಾಣೆಗೆ ರವಾನಿಸಲಾಗಿದೆ.

ಕಣ್ಣನ್ ಗುರುಸ್ವಾಮಿ ಎಂಬ ಹೆಸರಿನ ವ್ಯಕ್ತಿಯಿಂದ kannnannandik@gmail.com ಇ-ಮೇಲ್ ಖಾತೆಯ ಮೂಲಕ ಈ ಬೆದರಿಕೆಯ ಸಂದೇಶವನ್ನು ಭಟ್ಕಳ ಶಹರ ಠಾಣೆಗೆ ಕಳುಹಿಸಲಾಗಿದೆ. ಜುಲೈ 10ರ ಬೆಳಗ್ಗೆ 7:24ಕ್ಕೆ bhatkaltownkwr@ksp.gov.in ಗೆ ಈ ಇ-ಮೇಲ್ ರವಾನೆಯಾಗಿದೆ.

ಇ-ಮೇಲ್ ಸಂದೇಶ ಬಂದ ನಂತರ ಭಟ್ಕಳ ಪೊಲೀಸರು ಎಚ್ಚರಿಕೆ ವಹಿಸಿದ್ದಾರೆ. ಜಿಲ್ಲಾ ಬಾಂಬ್ ನಿಷ್ಕ್ರಿಯ ದಳದ ಸಹಾಯದಿಂದ ನಗರದ ಪ್ರಮುಖ ಪ್ರದೇಶಗಳಲ್ಲಿ ತಪಾಸಣೆ ನಡೆಸಲಾಗಿದೆ. ಭಟ್ಕಳ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಹಲವಾರು ಸಂವೇದನಾಶೀಲ ಸ್ಥಳಗಳನ್ನು ಪೊಲೀಸರು ಪರಿಶೀಲಿಸಿದ್ದಾರೆ.

ಈ ಸಂಬಂಧ ಭಟ್ಕಳ ಶಹರ ಠಾಣೆಯ ಪಿಎಸ್ಐ ನವೀನ್ ನಾಯ್ಕ ಅವರು ಸ್ವಯಂಪ್ರೇರಿತ ದೂರು ದಾಖಲಿಸಿದ್ದಾರೆ. ಕಣ್ಣನ್ ಗುರುಸ್ವಾಮಿ ಹೆಸರಿನ ವ್ಯಕ್ತಿಯ ವಿರುದ್ಧ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಈತ ಯಾರು, ಸಂದೇಶದ ಹಿಂದೆ ಯಾರ ಕೈವಾಡ ಇದೆ ಎನ್ನುವ ಕುರಿತು ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಆದರೆ ಪೊಲೀಸ್ ಠಾಣೆಗೆ ಈ ರೀತಿ ಬೆದರಿಕೆ ಇ-ಮೇಲ್ ರವಾನೆಯಾಗಿರುವುದು ಸಾರ್ವಜನಿಕರಲ್ಲಿ ಆತಂಕ‌ ಉಂಟುಮಾಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸರು ನಗರದಾದ್ಯಂತ ಕಟ್ಟುನಿಟ್ಟಿನ ಭದ್ರತೆಯನ್ನು ಕೈಗೊಂಡಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!