
ಭಟ್ಕಳ: ತಾಲ್ಲೂಕಿನ ಮುರುಡೇಶ್ವರದ ಜನತಾ ವಿದ್ಯಾಲಯದ ಎದುರಿನ ನಾಯ್ಕ ರೆಸಿಡೆನ್ಸಿ ಲಾಡ್ಜ್ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿದ್ದ ಖಚಿತ ಮಾಹಿತಿ ಮೇರೆಗೆ ಪೊಲೀಸ್ ನಿರೀಕ್ಷಕ ಸಂತೋಷ್ ಕಾಯ್ಕಿಣಿ ಅವರ ನೇತೃತ್ವದಲ್ಲಿ ಪಿಎಸ್ಐ ಹನಮಂತ ಬಿರಾದಾರ್ ಮತ್ತು ತಂಡ ದಾಳಿ ನಡೆಸಿ ಕೊಲ್ಕತ್ತಾ ಮೂಲದ 22 ವರ್ಷದ ಯುವತಿಯೊಬ್ಬಳನ್ನು ರಕ್ಷಿಸಿದ್ದಾರೆ. ಸಿದ್ದಾಪುರ ಮೂಲದ ಗಣೇಶ ನಾಯ್ಕ, ಲಾಡ್ಜ್ ಮಾಲೀಕ ವಿನಾಯಕ ನಾಯ್ಕ ಹಾಗೂ ರೂಮ್ ಬಾಯ್ ಆಕಾಶ ಅನಿಲ್ ಎಂಬಾತನನ್ನು ಬಂಧಿಸಿದ್ದಾರೆ.
ಆರೋಪಿ ಗಣೇಶ್ ನಾಯ್ಕ ಬೆಂಗಳೂರಿನಿಂದ ಮಹಿಳೆಯನ್ನು ಆಕೆಯ ಆರ್ಥಿಕ ಸಂಕಷ್ಟವನ್ನು ಬಳಸಿಕೊಂಡು ಹಣ ಕೊಡುವುದಾಗಿ ನಂಬಿಸಿ ಮುರುಡೇಶ್ವರಕ್ಕೆ ಕರೆತಂದಿದ್ದ. 2ನೇ ಆರೋಪಿ ಲಾಡ್ಜ್ ಮಾಲೀಕ ವಿನಾಯಕ ನಾಯ್ಕ ಮತ್ತು 3ನೇ ಆರೋಪಿ ರೂಮ್ ಬಾಯ್ ಆಕಾಶ್ ಅನಿಲ್ ಈ ಅಕ್ರಮ ಚಟುವಟಿಕೆಗೆ ತಾಣ ಒದಗಿಸಿದ್ದರು. ಈ ವೇಳೆ ದಾಳಿ ನಡೆಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.
ಈ ಸಂಬಂಧ ಮುರುಡೇಶ್ವರ ಪೊಲೀಸ್ ಠಾಣೆಯಲ್ಲಿ BNS 2023ರ ಕಾಯ್ದೆ 143(1)(2), 144(2) ಮತ್ತು ಅಕ್ರಮ ಸಾಗಣೆ ತಡೆ ಕಾಯ್ದೆ 1956ರ ಸೆಕ್ಷನ್ 3, 4ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ದಾಳಿಯ ಸಮಯದಲ್ಲಿ 4,630 ನಗದು, 2 ಮೊಬೈಲ್ ಫೋನ್ಗಳು, 10 ನಿರೋಧ ಪ್ಯಾಕೆಟ್ಗಳು, 1 ಲಾಡ್ಜ್ ರಿಜಿಸ್ಟರ್ ಮತ್ತು 1 ಬಜಾಜ್ ಪಲ್ಸರ್ ಮೋಟಾರ್ಸೈಕಲ್ನ್ನು ವಶಕ್ಕೆ ಪಡೆಯಲಾಗಿದೆ. ಸಂತ್ರಸ್ತೆಯನ್ನು ಭಟ್ಕಳದ ಮಹಿಳಾ ಸಾಂತ್ವನ ಕೇಂದ್ರಕ್ಕೆ ಸುರಕ್ಷಿತವಾಗಿ ಕಳುಹಿಸಲಾಗಿದೆ.