Uncategorized

ಗಾಯಗೊಂಡು ದಡಕ್ಕೆ ಬಂದ ಆಮೆಗೆ ಚಿಕಿತ್ಸೆ ನೀಡಿದ ಅರಣ್ಯ ಇಲಾಖೆ.

ಗಾಯಗೊಂಡು ದಡಕ್ಕೆ ಬಂದ ಆಮೆಗೆ ಚಿಕಿತ್ಸೆ ನೀಡಿದ ಅರಣ್ಯ ಇಲಾಖೆ

ಕಾರವಾರ: ಬಲೆಗೆ ಸಿಲುಕಿ ಗಾಯಗೊಂಡು ತನ್ನ ಎಡ ಬದಿಯ ಎರಡು ಕಾಲುಗಳ ಸ್ವಾಧೀನ ಕಳೆದುಕೊಂಡು ದಡಕ್ಕೆ ಬಂದಿರುವ ಆಮೆಗೆ ಚಿಕಿತ್ಸೆ ನೀಡಿ ಪುನಃ ಸಮುದ್ರಕ್ಕೆ ಬಿಡಲಾಯಿತು.

ಕಾರವಾರ ತಾಲೂಕಿನ ದೇವಬಾಗ ಸಮುದ್ರ ತೀರದಲ್ಲಿ ಕಂಡು ಬಂದಿರುವ ಓಲೀವ್ ರೆಡ್ಲಿ (Olive Redly) ಜಾತಿಗೆ ಸೇರಿದ ಆಮೆಯನ್ನು ಪುನಃ ಸಮುದ್ರಕ್ಕೆ ಬಿಡಲು ಮುಂದಾಗಿರುವ ಅರಣ್ಯ ಇಲಾಖೆ ಸಿಬ್ಬಂದಿಗೆ ಆಮೆ ಯಾವುದೇ ಸಮಸ್ಯೆಯಿಂದ ಬಳಲುತ್ತಿರುವುದು ಗಮನಕ್ಕೆ ಬಂದಿದೆ. ಕೂಡಲೇ ಆಮೆಯನ್ನು ಕಚೇರಿಗೆ ತಂದು ಪರಿಶೀಲಿಸಲಾಯಿತು.

ಆಮೆ‌ ಬಲೆಗೆ ಸಿಲುಕಿ ಅಥವಾ ಇನ್ನಿತರ ಕಾರಣದಿಂದ ಗಾಯಗೊಂಡು ತನ್ನ ಎಡ ಬದಿಯ ಎರಡೂ ಕಾಲುಗಳ ಸ್ವಾಧೀನತ್ವ ಕಳೆದುಕೊಂಡಿರುವುದು ತಿಳಿದು ಬಂದಿದೆ. ಉಡುಪಿಯ ರೀಪ್ ವಾಚ್ ಸಂಸ್ಥೆಯ ಸಿಬ್ಬಂದಿಯನ್ನು ಕರೆಯಿಸಿ ಆಮೆಗೆ ಚಿಕಿತ್ಸೆ ನೀಡಿ ಸಮುದ್ರಕ್ಕೆ ಬಿಡಲಾಯಿತು.


ಓಲೀವ್ ರೆಡ್ಲಿ ಜಾತಿಯ ಆಮೆ ಹೆಚ್ಚಾಗಿ ಆಳ ಸಮುದ್ರದಲ್ಲಿರುತ್ತವೆ. ಆದರೆ ದೇವಬಾಗ ಸಮುದ್ರ ತೀರದಲ್ಲಿ ಸಿಕ್ಕಿರುವ ಆಮೆ ತನ್ನ ಒಂದು ಬದಿಯ ಎರಡೂ ಕಾಲುಗಳ ಸ್ವಾಧೀನ ಕಳೆದುಕೊಂಡಿರುವುದರಿಂದ ಈಜಿ ಮುಂದೆ ಸಾಗಲಾಗದೆ ತೆರೆಯ ರಭಸಕ್ಕೆ ದಡಕ್ಕೆ ಬಂದಿದೆ. ಚಿಕಿತ್ಸೆ ನೀಡ ಸಮುದ್ರಕ್ಕೆ ಬಿಡಲಾಗಿದೆ ಎಂದು ಅರಣ್ಯ ಅಧಿಕಾರಿ ತಿಳಿಸಿದ್ದಾರೆ.

Related Articles

Leave a Reply

Your email address will not be published. Required fields are marked *

Back to top button
error: Content is protected !!